Showing posts with label ಕರ್ನಾಟಕ. Show all posts
Showing posts with label ಕರ್ನಾಟಕ. Show all posts

Sunday, February 11, 2007

ಸುವರ್ಣ ಕರ್ನಾಟಕಕ್ಕೆ ಬರೆಗಳು

ಸುವರ್ಣ ಕರ್ನಾಟಕಕ್ಕೆ ಬರೆಗಳು

೧. ಕನ್ನಡ ತಮಿಳಿನಷ್ಟೆ ಹಳೆಯದಾದರು ಶಾಸ್ತ್ರೀಯ ಭಾಷೆಯಲ್ಲ...
೨ ಕಾವೇರಿ ಕನ್ನಡ ನಾಡಿನಲ್ಲೆ ಹುಟ್ಟಿದರೂ ತಮಿಳುನಾಡಿಗೆ ಹೆಚ್ಚಿನ ಪಾಲು

ಬಹುಶ: ನಮಗೆ ಕನ್ನಡಕ್ಕೆ ಜಯವಾಗಲಿ ಅನ್ನುವುದೆ ಗೊತ್ತೆ ಹೊರತು, ಕೇಂದ್ರಕ್ಕೆ ಧಿಕ್ಕಾರ ಅನ್ನುವದು ಗೊತ್ತಿಲ್ಲ. ಅದಕ್ಕೆ ಈ ತರಹದ ಬರೆಗಳು ಆಗಾಗ ಆಗುತ್ತಲೆ ಇವೆ. ಹಿಂದಿಯ ಹೇರಿಕೆಯನ್ನು ವಿರೋಧಿಸಿದ್ದಕ್ಕೆ ತಮಿಳುನಾಡಿಗೆ ಶಾಸ್ತ್ರಿಯ ಭಾಷೆಯ ರಾಜ್ಯದ ಸ್ಥಾನಮಾನವೂ ಸಿಕ್ಕಿದೆ....ಕಾವೇರಿಯ ಹೆಚ್ಚಿನ ಪಾಲು ಕೂಡ.

ನಾವು ಕಾರಣರೆ?
ಹೌದು...ನಮ್ಮ ಶಾಂತ ರೂಪ, ಆಲಸ್ಯ ಎಲ್ಲ ನಮ್ಮನ್ನ ಈ ಸ್ಠಿತಿಗೆ ತಂದಿದೆ.
ಕೇಂದ್ರಕ್ಕೆ ಕನ್ನಡಿಗರ ನಿಜ ಸ್ವರೂಪದ ಪರಿಚಯವಾಗಬೇಕು. ಕೇಂದ್ರದ ಕಿವಿಗೆ ಸ್ವಲ್ಪ ಕಾದ ಎಣ್ಣೆಯನ್ನು ಬಿಡುವ ಹೊತ್ತು ಇದು.
ಕನ್ನಡಿಗರೇ, ಇನ್ನು ಎಷ್ಟು ಹೊತ್ತು ಮಲಗಿರೋಣ!!!ಎದ್ದೇಳಿ.

Tuesday, October 31, 2006

ಸುವರ್ಣ ಕನ್ನಡ ರಾಜ್ಯೋತ್ಸವ

ಸುವರ್ಣ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

ಐವತ್ತು ವಸಂತಗಳಾದವು
ಲೆಕ್ಕವಿಲ್ಲದಷ್ಟು ದೀಪಗಳು ಹೊತ್ತಿದವು
ವಿಶ್ವಕ್ಕೆಲ್ಲ ಬೆಳಕು
ಶಿಖರದೆತ್ತರದ ಹೆಸರು
ಏನಾದರೇನು?
ಒಂದಿಷ್ಟು ಅರಿಶಿಣ, ಒಂದಿಷ್ಟು ಕುಂಕುಮ
ಮೂಡಬೇಕು ಅಸಂಖ್ಯ ಕನ್ನಡ ಮನಗಳಲ್ಲಿ


ಈ ಶುಭ ಉತ್ಸವದಲ್ಲಿ ನಮ್ಮ ಮನಗಳಲ್ಲಿ ಕನ್ನಡದ ದೀಪ ಹೊತ್ತಿಸೋಣ, ಕನ್ನಡದ ಬಾವುಟ ಏರಿಸಿ ಹಾರಿಸೋಣ.

Monday, September 11, 2006

ನೋಡಿ ಸ್ವಾಮಿ ನಾನಿರೋದೆ ಹೀಗೆ!

'ಬೆಂಗಳೂರು ಕನ್ನಡಿಗರ ಸ್ವತ್ತು. ಇಲ್ಲಿ ಯಾರ ಸೊಕ್ಕು ನಡೆಯುವುದಿಲ್ಲ, ಅದೂ ನನ್ನ ಮುಂದೆ' ಅಂತ ದಬಾಯಿಸ್ತಾ ಇದ್ದೆ ಒಬ್ಬ ಕೊಂಗನನ್ನ. ಹಾಗೆ ಮಾತನಾಡುತ್ತಿದ್ದಂತೆ ನನ್ನ ಕನ್ನಡ ಮಿತ್ರರೆಲ್ಲ ನನ್ನನ್ನು ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಿದ್ದರು. ಅವರ ಮುಖದಲ್ಲಿ ನನಗಾಗಿ ಬೇಕಾದಷ್ಟು ಪ್ರಶ್ನೆಗಳಿದ್ದವು. ಕೆಲವರಂತು ಇದೆಲ್ಲ ಬೇಕಾ? ಯಾಕೆ ಜಗಳಗಂಟಿ ಆಗಿ ಬಿಟ್ಟಿದ್ದೀಯಾ? ಅನ್ನೋಕೆ ಶುರು ಮಾಡಿದ್ರು. ನಾನು ಅರೆರೆ! ಇವತ್ತು ಹೀಗೆ ಇವ್ನು ಮಾತಡ್ತಾನೆ, ನಾಳೆ ಇನ್ನೊಬ್ಬ. ಸುಮ್ನೆ ಇರಿ ಎಲ್ಲ. ಇವ್ರಿಗೆ ಅಲ್ಲಲ್ಲೆ ಪಾಠ ಕಲ್ಸಬೇಕು. ಎನ್ ಬೆಂಗಳೂರು ಇವರ ಅಪ್ಪಂದ ಅಂತ ಕೇಳ್ದೆ. ಆ ಕೊಂಗ ಸುಮ್ಮನಾದ, ನನ್ನ ಮಿತ್ರರಲ್ಲ. ನೀನು ಕೋಳಿ ಜಗಳ ಶುರು ಮಾಡ್ಬೇಡ. ನಾನು ಏನೂ ಮಾತನಾಡಲಿಲ್ಲ, ಸುಮ್ಮನೆ ಬಂದೆ. ನನ್ನ ಉದ್ದೇಶ ಇಷ್ಟೆ ಆಗಿತ್ತು... 'ನೋಡಿ ಸ್ವಾಮಿ ನಾನಿರೋದೆ ಹೀಗೆ! adjust ಮಾಡ್ಕೊಳೊಕೆ ನನ್ನಿಂದ ಆಗೊಲ್ಲ ...ಅದೂ ಕನ್ನಡದ ವಿಷ್ಯದಲ್ಲಿ'


ಕನ್ನಡದ ಬಗ್ಗೆ ವಿಷಯ ಬಂದಾಗೆಲ್ಲ ನನ್ನ ಮೈ ರೋಮ ರೋಮ ಸೆಟೆದು ನಿಲ್ಲುತ್ತೆ. ಅದೂ ಹೆಚ್ಚ್ಚು ಕಮ್ಮಿ ಮಾತಾಡಿದ್ರೆ ಸುಮ್ನೆ ಇರೊಳಲ್ಲ ನಾನು. ನನ್ನ ಮಿತ್ರರೆಲ್ಲ ನಂಗೆ ' ನೀನು ಬಿಡಮ್ಮ, ಕನ್ನಡ ಅಭಿಮಾನಿ' ಅನ್ನೋಕೆ ಶುರು ಮಾಡಿದ್ರು. ಹೌದು ನಾನು , ನಿಮಗೆಲ್ಲ ಎನೂ ಅನ್ನೊಸೊಲ್ವ? ನಿಮ್ಮ ಅಮ್ಮನ್ನ ಬೈದ್ರೆ ಸುಮ್ಮನೆ ಬರ್ತೀರಾ? ಅಷ್ಟೆ ನನ್ನ ಪ್ರಶ್ನೆ 'ನೋಡಿ ಸ್ವಾಮಿ ನಾನಿರೋದೆ ಹೀಗೆ! adjust ಮಾಡ್ಕೊಳೊಕೆ ನನ್ನಿಂದ ಆಗೊಲ್ಲ ...ಅದೂ ಕನ್ನಡದ ವಿಷ್ಯದಲ್ಲಿ'

ನೋಡು , ಇವತ್ತು ನಾವೆಲ್ಲ forumಗೆ ಹೋಗೋಣ, ನೀನು ತರ್ಲೆ ಶುರು ಮಾಡ್ಬೇಡ ಅಂದ ನನ್ನ ಗೆಳತಿನ 'ನೋಡಮ್ಮ , ಬೆಂಗಳೂರು forumಗೆ ತಾನೆ ಹೋಗೊದು, ಮತ್ತೇನು ತರ್ಲೆ ಬಂತು. ನಂಗಿರೋದು ಒಂದೆ ವ್ಯಕ್ತಿತ್ತ್ವ, ನಂಗಿರೋದು ಒಂದೆ ಆತ್ಮ. ನಂಗಿರೋಳು ಒಬ್ಳೆ ಅಮ್ಮ, ಬೇರೆ ಬೇರೆ ಮುಖ್ವಾಡ ಹಾಕಿಕೊಂಡು ತಿರುಗೋಕೆ ಆಗೊಲ್ಲ' 'ನೋಡಿ ಸ್ವಾಮಿ ನಾನಿರೋದೆ ಹೀಗೆ! adjust ಮಾಡ್ಕೊಳೊಕೆ ನನ್ನಿಂದ ಆಗೊಲ್ಲ ...ಅದೂ ಕನ್ನಡದ ವಿಷ್ಯದಲ್ಲಿ'

೪ ಜನ ಉತ್ತರ ಭಾರತೀಯರಿದ್ದ ಮಾತ್ರಕ್ಕೆ ಹಿಂದಿ ಶುರು ಮಾಡ್ಕೊಳೋದ್ರಲ್ಲಿ ಎನರ್ಥ? ಕರ್ನಾಟಕಕ್ಕೆ ಬಂದು ಎಷ್ಟು ದಿನಗಳಾದ್ವು? ತೀರ ಹೊಸಬರು ಆದ್ರೆ, englishನಲ್ಲಿ ಮಾತಾಡ್ತೀನಿ. ಅದೂ ಒಂದು ತಿಂಗಳು ಮಾತ್ರ, ಆಮೇಲೆ ಅದೆ ಮುಖ ಸಿಕ್ಕಿದ್ರೆ, ನನ್ನ ಬೈಬೆಡಿ 'ನೋಡಿ ಸ್ವಾಮಿ ನಾನಿರೋದೆ ಹೀಗೆ! adjust ಮಾಡ್ಕೊಳೊಕೆ ನನ್ನಿಂದ ಆಗೊಲ್ಲ ...ಅದೂ ಕನ್ನಡದ ವಿಷ್ಯದಲ್ಲಿ'


ಸಾರಾಂಶ : 'ನೋಡಿ ಸ್ವಾಮಿ ನಾನಿರೋದೆ ಹೀಗೆ! adjust ಮಾಡ್ಕೊಳೊಕೆ ನನ್ನಿಂದ ಆಗೊಲ್ಲ ...ಅದೂ ಕನ್ನಡದ ವಿಷ್ಯದಲ್ಲಿ' :)

Monday, June 26, 2006

ತಾಯಿ ಭುವನೇಶ್ವರಿ

ತರುವಾಗಿ, ಸಿರಿಯಾಗಿ ಶ್ರೀಗಂಧವಾಗಿ
ನೀರಾಗಿ, ಬಾಳಾಗಿ ಕಾವೇರಿಯಾಗಿ
ಗಿರಿಯಾಗಿ,ಹಿರಿದಾಗಿ ಸಹ್ಯಾದ್ರಿಯಾಗಿ
ಹಸಿರಾಗಿ, ಉಸಿರಾಗಿ ಮಲೆನಾಡಾಗಿ
ಪಂಪ , ರನ್ನರ ಕಾವ್ಯಾಮೃತವಾಗಿ
ದಾಸ , ಶರಣರ ನುಡಿಮುತ್ತುಗಳಾಗಿ
ಶಿಲೆಯಲ್ಲಿ ಕಲೆಯಾಗಿ ಸೌಂದರ್ಯವಾಗಿ
ಕೆಚ್ಚೆದೆಯ ವೀರರ ಇತಿಹಾಸವಾಗಿ
ಹೊನ್ನಿನ ಮಣ್ಣಾಗಿ ಕರುನಾಡಾಗಿ
ನಡೆಯಾಗಿ, ನುಡಿಯಾಗಿ ಕನ್ನಡವಾಗಿ
ಮೆರೆದಿಹಳು ಸಿರಿದೇವಿ ಭುವನೇಶ್ವರಿಯಾಗಿ