Friday, February 23, 2007

ಅಂದು-ಇಂದು

ಹೊಳೆವ ಹೊಳೆಯ ದಂಡೆಯಲ್ಲಿ
ಅಂದು ನಗುತ ಕುಳಿತೆವಲ್ಲಿ
ಬಾನ ತುಂಬ ಹಕ್ಕಿ ಗುಂಪು
ಗಾಳಿಗಿತ್ತು ಮಧುರ ಕಂಪು
ಮರದ ತುಂಬ ಹೂವ ರಾಶಿ
ಮನದ ತುಂಬ ಒಲಮೆ ಸೂಸಿ
ನಿನಗೆ ನಾನು,ನನಗೆ ನೀನು
ಬರೆದ ಹಾಡು ಭಾವ ಜೇನು
ಇಂದು ಬರಿಯ ಅಕ್ಷರ
ಪ್ರೀತಿ ತಂತೇ ಬೇಸರ?
ಕೆರೆಯ ಹರಿವ ನೀರಾಗಿ
ಮರದ ಬಾಡೋ ಹೂವಾಗಿ
ಒಲವು ಮರೆಯಾಯಿತೆ?
ಇಂದು ಮರೆತು ಹೋಯಿತೆ?

Sunday, February 11, 2007

ಸುವರ್ಣ ಕರ್ನಾಟಕಕ್ಕೆ ಬರೆಗಳು

ಸುವರ್ಣ ಕರ್ನಾಟಕಕ್ಕೆ ಬರೆಗಳು

೧. ಕನ್ನಡ ತಮಿಳಿನಷ್ಟೆ ಹಳೆಯದಾದರು ಶಾಸ್ತ್ರೀಯ ಭಾಷೆಯಲ್ಲ...
೨ ಕಾವೇರಿ ಕನ್ನಡ ನಾಡಿನಲ್ಲೆ ಹುಟ್ಟಿದರೂ ತಮಿಳುನಾಡಿಗೆ ಹೆಚ್ಚಿನ ಪಾಲು

ಬಹುಶ: ನಮಗೆ ಕನ್ನಡಕ್ಕೆ ಜಯವಾಗಲಿ ಅನ್ನುವುದೆ ಗೊತ್ತೆ ಹೊರತು, ಕೇಂದ್ರಕ್ಕೆ ಧಿಕ್ಕಾರ ಅನ್ನುವದು ಗೊತ್ತಿಲ್ಲ. ಅದಕ್ಕೆ ಈ ತರಹದ ಬರೆಗಳು ಆಗಾಗ ಆಗುತ್ತಲೆ ಇವೆ. ಹಿಂದಿಯ ಹೇರಿಕೆಯನ್ನು ವಿರೋಧಿಸಿದ್ದಕ್ಕೆ ತಮಿಳುನಾಡಿಗೆ ಶಾಸ್ತ್ರಿಯ ಭಾಷೆಯ ರಾಜ್ಯದ ಸ್ಥಾನಮಾನವೂ ಸಿಕ್ಕಿದೆ....ಕಾವೇರಿಯ ಹೆಚ್ಚಿನ ಪಾಲು ಕೂಡ.

ನಾವು ಕಾರಣರೆ?
ಹೌದು...ನಮ್ಮ ಶಾಂತ ರೂಪ, ಆಲಸ್ಯ ಎಲ್ಲ ನಮ್ಮನ್ನ ಈ ಸ್ಠಿತಿಗೆ ತಂದಿದೆ.
ಕೇಂದ್ರಕ್ಕೆ ಕನ್ನಡಿಗರ ನಿಜ ಸ್ವರೂಪದ ಪರಿಚಯವಾಗಬೇಕು. ಕೇಂದ್ರದ ಕಿವಿಗೆ ಸ್ವಲ್ಪ ಕಾದ ಎಣ್ಣೆಯನ್ನು ಬಿಡುವ ಹೊತ್ತು ಇದು.
ಕನ್ನಡಿಗರೇ, ಇನ್ನು ಎಷ್ಟು ಹೊತ್ತು ಮಲಗಿರೋಣ!!!ಎದ್ದೇಳಿ.